ಅಂತರ್ಜಾತಿ ಯುವಕನನ್ನು ಪ್ರೀತಿಸಿದ ತಂಗಿ: ರೈಲಿಗೆ ತಲೆಕೊಟ್ಟು ಅಣ್ಣ ಆತ್ಮಹತ್ಯೆ

ಸಹೋದರಿ ಅಂತರ್ಜಾತಿ ಯುವಕನನ್ನು ಪ್ರೀತಿಸುತ್ತಿರುವುದರಿಂದ ಬೇಸತ್ತ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ..
ಮೃತ ಸಂತೋಷ್
ಮೃತ ಸಂತೋಷ್
Updated on

ಬೆಂಗಳೂರು: ಸಹೋದರಿ ಅಂತರ್ಜಾತಿ ಯುವಕನನ್ನು ಪ್ರೀತಿಸುತ್ತಿರುವುದರಿಂದ ಬೇಸತ್ತ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸರ್ಜಾಪುರ ರಸ್ತೆಯ ಕುಗೂರು ನಿವಾಸಿ ಸಂತೋಷ್ ಮತ ಯುವಕನಾಗಿದ್ದಾನೆ. ಸಂತೋಷ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ 8.30 ಕ್ಕೆ ಮನೆಯಿಂದ ಹೊರಟ ಸಂತೋಷ್ ತನ್ನ ಬೈಕ್ ಅನ್ನು ರೈಲು ನಿಲ್ದಾಣದ ಪಕ್ಕದ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿ ರೈಲ್ವೆ ಹಳಿ ಮೇಲೆ ಮಲಗಿದ್ದಾನೆ.

ರೈಲು ಸಂತೋಷ್ ಮೇಲೆ ಹರಿದು ಆತ ಸಾವನ್ನಪ್ಪಿದ್ದಾನೆ. ಹಳಿಯ ಮೇಲೆ ಶವ ಬಿದ್ದಿರುವುದನ್ನು ನೋಡಿದ ದಾರಿಹೋಕರು ರೈಲ್ವೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಿಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ. ಸಂತೋಷ್ ಬಳಿ ಡೆಚ್ ನೋಟಿ ಸಿಕ್ಕಿದೆ.

ಅದರಲ್ಲಿ ಸಂತೋಷ್ ತನ್ನ ಕಿರಿಯ ಸಹೋದರಿ ಅನ್ಯ ಜಾತಿಯ ಯುವಕನನ್ನು ಪ್ರೇಮಿಸಿದ್ದು, ಕಳೆದ ಎರಡು ದಿನಗಳ ಹಿಂದೆ ಸರ್ಜಾಪುರ ಪೊಲೀಸ್ ಠಾಣೆಗೆ ಕರೆತಂದು ಯುವಕನನ್ನು ತ್ಯಜಿಸುವಂತೆ ಸಲಹೆ ನೀಡಿದ್ದ, ಆದರೆ ಅದಕ್ಕೆ ಸೊಪ್ಪು ಹಾಕದ ಸಂತೋಷ್ ಸಹೋದರಿ ಅನ್ಯಜಾತಿಯ ಯುವಕನನ್ನೇ ಮದುವೆಯಾಗುವುದಾಗಿ ತಿಳಿಸಿದ್ದಳು. ಇದರಿಂದ ಮನನೊಂದ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com