ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಎಟಿಎಂ ಯಂತ್ರಕ್ಕೆ ಕಿಕ್ ಕೊಟ್ಟು, ಆಸ್ಪತ್ರೆ ಸೇರಿದ ಕುಡುಕ

ಎಟಿಎಂನಲ್ಲಿ ಹಣ ಬರಲಿಲ್ಲವೆಂದು ಕುಪಿತಗೊಂಡ ವ್ಯಕ್ತಿಯೊಬ್ಬ ಎಟಿಎಂ ಯಂತ್ರಕ್ಕೆ ಹೊಡೆದು ಪೊಲೀಸರ...
ಬೆಂಗಳೂರು: ಎಟಿಎಂನಲ್ಲಿ ಹಣ ಬರಲಿಲ್ಲವೆಂದು ಕುಪಿತಗೊಂಡ ವ್ಯಕ್ತಿಯೊಬ್ಬ ಎಟಿಎಂ ಯಂತ್ರಕ್ಕೆ ಹೊಡೆದು ಪೊಲೀಸರ ಅತಿಥಿಯಾಗಿದ್ದಾನೆ. 
ರಾಜು ದೇವರಾಜ್(46) ಬಂಧಿತ ಆರೋಪಿ. ಕಂಠ ಪೂರ್ತಿ ಮದ್ಯ ಸೇವಿಸಿದ್ದ ಈತ ಹಲಸೂರು ಸಮೀಪದ ವರ್ತುಲ ರಸ್ತೆ ಬಳಿ ಎಸ್ ಬಿಐ ಎಟಿಯಂನಲ್ಲಿ ತನ್ನ ಎಟಿಎಂ ಕಾರ್ಡ್ ಹಾಕಿ ಹಣ ತೆಗೆಯಲು ಮುಂದಾಗಿದ್ದಾನೆ. ಆದರೆ, ಎಟಿಯಂನಿಂದ ಹಣ ಬರದೇ ಹಿನ್ನಲೆಯಲ್ಲಿ ಯಂತ್ರಕ್ಕೆ ಕೈಯಿಂದ ಗುದ್ದಿ ಜಖಂ ಗೊಳಿಸಿದ್ದಾನೆ.  
ಶಬ್ಧ ಕೇಳುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್ ಕಳ್ಳ ಕಳ್ಳ ಎಂದು ಕಿರುಚಾಡಿದ್ದಾನೆ. ಆಗ ಸ್ಥಳೀಯರು ಓಡು ಬರುತ್ತಿದ್ದನು ಕಂಡ ರಾಜು, ಅಲ್ಲಿಂದ ಓಡ ತೊಡಗಿದ್ದಾನೆ. ಕಂಠ ಪೂರ್ತಿ ಮದ್ಯ ಸೇವಿಸಿದ್ದರಿಂದ ಓಡುವ ರಬಸದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟಾಗಿ ಕೆಲಕ್ಕೆ ಬಿದ್ದಿದ್ದಾನೆ. 
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಎಟಿಯಂ ಯಂತ್ರವನ್ನು ಕೈಯಿಂದ ಜಖಂಗೊಳಿಸಿದ ಹಿನ್ನಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com