ಬೆಂಗಳೂರು: ವಿವಾಹಿತೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದ ಪ್ರಿಯಕರ

ಬೈಯಪ್ಪನಹಳ್ಳಿಯ ಸಿದ್ದಗುಂಟೆ ಪಾಳ್ಯದ ರಾಜ್ ಕುಮಾರ್ ಸರ್ಕಲ್ ಬಳಿ ಯುವಕನೊಬ್ಬ ವಿವಾಹಿತೆಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ...
ಅಪರಾಧ
ಅಪರಾಧ
Updated on

ಬೆಂಗಳೂರು: ಬೈಯಪ್ಪನಹಳ್ಳಿಯ ಸಿದ್ದಗುಂಟೆ ಪಾಳ್ಯದ ರಾಜ್ ಕುಮಾರ್ ಸರ್ಕಲ್ ಬಳಿ ಯುವಕನೊಬ್ಬ ವಿವಾಹಿತೆಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ತಮಿಳುನಾಡು ಮೂಲದ 30 ವರ್ಷದ ಚಿತ್ರಾ ಎನ್ನುವವರು ಹತ್ಯೆಗೀಡಾಗಿದ್ದು, ಆರೋಪಿ 19 ವರ್ಷದ ಅಜಿತ್ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ.

ಚಿತ್ರಾಳ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಅಜಿತ್ ಬಳಿಕ ಬೈಯಪ್ಪನಹಳ್ಳಿ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com