ಹಾಸನದಲ್ಲಿ ಬೋರ್‌ವೆಲ್‌ ಲಾರಿ ಪಲ್ಟಿ: ಐವರ ದುರ್ಮರಣ

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುತ್ತಿಗೆ ಗ್ರಾಮದ ಬಳಿ ಬೋರ್‌ವೆಲ್‌ ಲಾರಿಯೊಂದು ಪಲ್ಟಿ ಹೊಡೆದ ಐವರು ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ...
ಬೋರ್‌ವೆಲ್‌ ಲಾರಿ
ಬೋರ್‌ವೆಲ್‌ ಲಾರಿ
Updated on

ಅರಕಲಗೂಡು: ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುತ್ತಿಗೆ ಗ್ರಾಮದ ಬಳಿ ಬೋರ್‌ವೆಲ್‌ ಲಾರಿಯೊಂದು ಪಲ್ಟಿ ಹೊಡೆದ ಐವರು ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಳಗಿನ ಜಾವ 4.30ರ ಸುಮಾರಿನಲ್ಲಿ ಬೋರ್ ವೆಲ್ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ಮೃತರು ಜಾರ್ಖಂಡ್ ಮೂಲದ ಅನುತ್, ಮುಚಿರಾಮ್, ಭೀಮ್ ಸಿಂಗ್, ಪುದುರಾಮ್ ಹಾಗೂ ಅನಿಲ್ ಮಾತು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com