ಮಂಗಳವಾರ ಮತ್ತು ಬುಧವಾರ ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ ತೀವ್ರಾವಾಗುವ ಸಾಧ್ಯತೆಯಿದೆ. ರೆಡ್ಡಿ ಸಹೋದರರು ಅರಮನೆ ಮೈದಾನವನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡಿದ್ದು, ವಿಜಯನಗರ ಸಾಮ್ರಾಜ್ಯದ ವೈಭವವನ್ನು ಅತಿಥಿಗಳಿಗೆ ತೋರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮೈದಾನದಲ್ಲಿ ಖಾಸಗಿ ಭದ್ರತೆಯನ್ನು ಹಾಕಲಾಗಿದ್ದು, ಎಲ್ಲ ದ್ವಾರಗಳಲ್ಲೂ ಬೌನ್ಸರ್ ಗಳನ್ನೂ ನಿಯೋಜಿಸಲಾಗಿದೆ. ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಪ್ರವೇಶವನ್ನು ನಿಷೇಧಗೊಳಿಸಲಾಗಿದೆ.