ಕರ್ನಾಟಕ ಹೈಕೋರ್ಟ್: ಐವರು ನ್ಯಾಯಾಧೀಶರ ಪ್ರಮಾಣ ವಚನ

: ರಾಜ್ಯ ಹೈಕೋರ್ಟ್ ಗೆ ಹೆಚ್ಚುವರಿಯಾಗಿ ಐವರು ಜಡ್ಜ್ ಗಳು ಸೋಮವಾರ ಪ್ರಮಾಣ ವಚವ ಸ್ವೀಕರಿಸಿದರು. ..
ಹೈಕೋರ್ಟ್ ಹೆಚ್ಚುವರಿ ಜಡ್ಜ್ ಗಳಾಗಿ ಐವರು ನ್ಯಾಯಾಧೀಶರ ಪ್ರಮಾಣವಚನ
ಹೈಕೋರ್ಟ್ ಹೆಚ್ಚುವರಿ ಜಡ್ಜ್ ಗಳಾಗಿ ಐವರು ನ್ಯಾಯಾಧೀಶರ ಪ್ರಮಾಣವಚನ

ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ಹೆಚ್ಚುವರಿಯಾಗಿ ಐವರು ಜಡ್ಜ್ ಗಳು ಸೋಮವಾರ ಪ್ರಮಾಣ ವಚವ ಸ್ವೀಕರಿಸಿದರು.

ರಾಜ್ಯದ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಾದ ಕೆಂಪಯ್ಯ ಸೋಮಶೇಖರ್, ಕೊಟ್ರವ್ವ ಸೋಮಪ್ಪ ಮುದುಗಲ್, ಶ್ರೀನಿವಾಸ್ ಹರೀಶ್ ಕುಮಾರ್, ಜಾನ್ ಮೈಕಲ್ ಕುನ್ಹಾ ಮತ್ತು ಬಸವರಾಜ್ ಆನಂದ್ ಗೌಡ ಪಾಟೀಲ್ ಅವರು ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.

ಮುಖ್ಯ ನ್ಯಾಯಮೂರ್ತಿ ಸೌಮೇಂದು ಮುಖರ್ಜಿ ಐವರಿಗೂ ಪ್ರಮಾಣ ವಚನ ಬೋಧಿಸಿದರು. ಐವರು ನ್ಯಾಯಮೂರ್ತಿಗಳು ಮುಂದಿನ ಎರಡು ವರ್ಷಗಳ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com