ಬೆಂಗಳೂರಿನಲ್ಲಿ ಐಟಿ ದಾಳಿ: ಸುಮಾರು 4 ಕೋಟಿ ರೂ. ಹೊಸ ನೋಟು ವಶ

ಬೆಂಗಳೂರಿನ ಅಧಿಕಾರಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು 4 ಕೋಟಿಯಷ್ಟು ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ...
ಹೊಸ ನೋಟುಗಳು
ಹೊಸ ನೋಟುಗಳು
ಬೆಂಗಳೂರು: ಬೆಂಗಳೂರಿನ ಅಧಿಕಾರಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು 4 ಕೋಟಿಯಷ್ಟು ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. 
ಕಾವೇರಿ ನಿಗಮನದ ಎಂಡಿ ಚಿಕ್ಕರಾಯಪ್ಪ, ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಜಯಚಂದ್ರ ನಿವಾಸದ ಮೇಲೆ ಐಟಿ ಅಧಿಕಾರಿಗಳು ನಿನ್ನೆಯೇ ದಾಳಿ ನಡೆಸಿದ್ದು ಗುರುವಾರವೂ ಪರಿಶೀಲನೆ ಮುಂದುವರೆಸಿದ್ದಾರೆ. ದಾಳಿ ವೇಳೆ ಇಬ್ಬರೂ ಅಧಿಕಾರಿಗಳ ಮನೆಯಲ್ಲಿ 2 ಸಾವಿರ ಮುಖಬೆಲೆಯ ಸುಮಾರು 4 ಕೋಟಿ ರುಪಾಯಿ ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ. 
ಇಷ್ಟೊಂದು ಪ್ರಮಾಣದ ಹೊಸ ನೋಟುಗಳ ಇವರಿಬ್ಬರಿಗೆ ಹೇಗೆ ಸಿಕ್ಕವು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಎನ್ಡಿಟಿವಿಗೆ ತಿಳಿಸಿದ್ದಾರೆ. 
ಅಧಿಕಾರಿಗಳಿಂದ 5 ಕೆಜಿಗಿಂತ ಹೆಚ್ಚು ಚಿನ್ನ, ಆರು ಕೆಜಿ ಬೆಳ್ಳಿ ಪತ್ತೆಯಾಗಿದೆ. ಅಷ್ಟೇ ಅಲ್ಲ ಕೋಟ್ಯಂತರ ರುಪಾಯಿ ಬೆಲೆಯ 2 ಲ್ಯಾಂಬೋರ್ ಗಿನಿ ಕಾರು, ಒಂದು ಬೈಕ್ ಅನ್ನು ಖರೀದಿಸಿರುವ ದಾಖಲೆ ಪತ್ರ ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com