ಕುಂದಾಪುರ: ಆತ್ಮಹತ್ಯೆಗೆ ಯತ್ನ; ಮಕ್ಕಳಿಬ್ಬರ ಸಾವು, ದಂಪತಿ ಸ್ಥಿತಿ ಗಂಭೀರ

ಒಂದೇ ಕುಟುಂಬ ನಾಲ್ವರು ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಬೈಂದೂರು ಗಂಗನಾಡು ಕಾರತೂರಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮಕ್ಕಳಿಬ್ಬರು...
ಆತ್ಮಹತ್ಯೆ
ಆತ್ಮಹತ್ಯೆ

ಕುಂದಾಪುರ: ಒಂದೇ ಕುಟುಂಬ ನಾಲ್ವರು ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಬೈಂದೂರು ಗಂಗನಾಡು ಕಾರತೂರಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮಕ್ಕಳಿಬ್ಬರು ಸಾವನ್ನಪ್ಪಿದ್ದು, ದಂಪತಿಗಳ ಸ್ಥಿತಿ ಗಂಭೀರವಾಗಿದೆ.

ಆತ್ಮಹತ್ಯೆಗೆ ಯತ್ನಿಸಿರುವ ದಂಪತಿಗಳಾದ ಶಂಕರ ನಾರಾಯಣ ಹೆಬ್ಬಾರ್ ಹಾಗೂ ಮಹಾಲಕ್ಷ್ಮೀ ಸ್ಥಿತಿ ಗಂಭೀರವಾಗಿದ್ದು, ಮಕ್ಕಳಾದ ಅಶ್ವಿನ್ ಕುಮಾರ್ ಹೆಬ್ಬಾರ್ ಹಾಗೂ ಐಶ್ವರ್ಯ ಹೆಬ್ಬಾರ್ ಮೃತಪಟ್ಟಿದ್ದಾರೆ.

ಘಟನೆ ಸೋಮವಾರ ಬೆಳಗ್ಗೆ ಗಮನಕ್ಕೆ ಬಂದಿದ್ದು, ರಾತ್ರಿ ವಿಷ ಸೇವಿಸಿರಬಹುದೆಂದು ಹೇಳಲಾಗುತ್ತಿದೆ. ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ದಂಪತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com