ನಗರದ ಜಮ ಮೂಲಗಳಿಂದ 75 ಮೀಟರ್ ಅಂತರದಲ್ಲಿ ಕಟ್ಟಡ ಕಾಮಗಾರಿ ನಡೆಸುವಂತಿಲ್ಲ ಎಂದು ಕಳೆದ ವರ್ಷ ಹಸಿರು ನ್ಯಾಯಾಧೀಕರಣ ತೀರ್ಪು ನೀಡಿತ್ತು. ಈ ಆದೇಶದ ಬಗ್ಗೆ ಬಿಬಿಎಂಪಿ ಆಯುಕ್ತರು ಕೆಲ ದಿನಗಳ ಹಿಂದಷ್ಟೇ ಸುತ್ತೋಲೆಯೊಂದರನ್ನು ಹೊರಡಿಸಿ, ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಡಾವಣೆ ವಿನ್ಯಾಯಾ ಅಂತಿಮಗೊಂಡು ನಿರ್ಮಾಣ ಮಾಡಲಾಗಿರುವ ಬಡಾವಣೆಗಳ ಕಟ್ಟಗಳಿಗೆ ನ್ಯಾಯಾಧೀಕರಣದ ತೀರ್ಪು ಅನ್ವಯವಾಗುವುದಿಲ್ಲ ಎಂದು ಹೇಳಿದ್ದರು. ಹಸಿರು ನ್ಯಾಯಾಧೀಕರಣ ಒಂದು ಅರೆ ನ್ಯಾಯಿಕ ಸಂಸ್ಥೆಯಾಗಿದ್ದು, ಇದಕ್ಕೆ ನಿರ್ದೇಶನಗಳನ್ನು ನೀಡುವ ಅಧಿಕಾರವಿಲ್ಲ ಎಂದು ಸುತ್ತೋಲೆಯಲ್ಲಿದಾಖಲಿಸಿತ್ತು. ನ್ಯಾಯಾಧೀಕರಣದ ನ್ಯಾಯಾಧೀಶರ ಕಣ್ಣು ಮತ್ತಷ್ಟು ಕೆಂಪಗಾಗುವಂತೆ ಮಾಡಿತ್ತು.