ಕಳೆದ ಒಂದು ವರ್ಷದಿಂದ ನಡೆದ ಸತತ ಪ್ರಯತ್ನದಿಂದ ಕೊನೆಗೂ ದಂಪತಿ ನವದೆಹಲಿಯಲ್ಲಿ ಒಂದಾಗಿದ್ದಾರೆ. 2016ರ ಜೂನ್ ನಲ್ಲಿ ಲಾಹೋರ್ ನ ಯೋಹಾನಾ ಕಾಲೋನಿಯಲ್ಲಿರುವ ಚರ್ಚ್ ನಲ್ಲಿ ಇಬ್ಬರು ವಿವಾಹವಾಗಿದ್ದರು, ಆದರೆ ತನ್ನ ಪತ್ನಿಯನ್ನು ಭಾರತಕ್ಕೆ ಕರೆ ತರಲು ಸಾಧ್ಯವಾಗಿರಲಿಲ್ಲ. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮಧ್ಯಸ್ಥಿಕೆಯಿಂದ ಇಬ್ಬರು ಒಂದಾಗಿದ್ದಾರೆ. ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಈ ದಂಪತಿ ಒಂದಾಗಲು ಮಾಡಿದ ಸಹಾಯದಿಂದಾಗಿ ಸಿಲ್ವಿಯಾ ಏಪ್ರಿಲ್ 19 ರಂದು ದೆಹಲಿಗೆ ಆಗಮಿಸಿದ್ದು, ಇನ್ನೆರಡು ದಿನಗಳಲ್ಲಿ ಹುಬ್ಬಳ್ಳಿ ತಲುಪಲಿದ್ದಾರೆ.