ಭಟ್ಕಳ: ಬೋಟ್ ಮುಳುಗಿ ಸಮುದ್ರ ಪಾಲಾಗುತ್ತಿದ್ದ 30 ಮೀನುಗಾರರ ರಕ್ಷಣೆ

ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ನಲ್ಲಿ ನೀರು ತುಂಬಿದ್ದರ ಸಮುದ್ರ ಪಾಲಾಗುತ್ತಿದ್ದ 30 ಮೀನುಗಾರರನ್ನು ರಕ್ಷಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ನಲ್ಲಿ ನೀರು ತುಂಬಿದ್ದರ ಸಮುದ್ರ ಪಾಲಾಗುತ್ತಿದ್ದ 30 ಮೀನುಗಾರರನ್ನು ರಕ್ಷಿಸಲಾಗಿದೆ.
ಕಳೆದ ಶುಕ್ರವಾರ ಮೀನುಗಾರಿಕೆಗಾಗಿ ಸಮುದ್ರದಲ್ಲಿ ಸುಮಾರು 150 ಕಿ.ಮೀ ಕ್ರಮಿಸಿದ್ದ ಬೋಟ್ ಸಂಜೆ ವಾಪಸ್ ಬರುತ್ತಿದ್ದಾಗ ಭಟ್ಕಳ ಬಂದರು ಸಮೀಪ ಬರುತ್ತಿದ್ದಂತೆ ದೋಣಿಯಲ್ಲಿ ದೋಷ ಕಾಣಿಸಿಕೊಂಡು ನೀರು ತುಂಬಿಕೊಳ್ಳುತ್ತ ಮುಳುಗಲು ಆರಂಭಿಸಿತು.ಆತಂಕಗೊಂಡ ಮೀನುಗಾರರು ಕೂಡಲೇ ಇತರೆ ಬೋಟ್ ಗಳಿಗೆ ಮತ್ತು ಬಂದರು ಸಿಬ್ಬಂದಿಯ ಸಹಾಯ ಕೋರಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಕೆಲವು ಬೋಟ್ ಗಳು ಅಲೆಗಳ ಮಧ್ಯ ಅಪಾಯದಲ್ಲಿದ್ದ 30 ಮೀನುಗಾರರನ್ನು ರಕ್ಷಿಸಿದ್ದಾರೆ. 
ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕರಾವಳಿ ಪೊಲೀಸರು, ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com