ಬಸವನಗುಡಿಯ ರಾಮಕೃಷ್ಣ ಆಶ್ರಮ ಹತ್ತಿರ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡುತ್ತಿರುವ ಜಯಲಕ್ಷ್ಮಿ ಮತ್ತು ಉಮೇಶ್ ಅವರ ಬಳಿ ಪ್ರತಿದಿನ 80ರಿಂದ 100 ಮಂದಿ ಊಟಕ್ಕೆ ಬರುತ್ತಾರಂತೆ. ನಾವು ಮುದ್ದೆ-ಉಪ್ಸಾರಿಗೆ 15 ರೂಪಾಯಿ, ಅನ್ನ-ಸಾಂಬಾರ್ ಗೆ 25ರೂಪಾಯಿ, ವಡದ ಜೊತೆಗೆ 30ರೂಪಾಯಿ ತೆಗೆದುಕೊಳ್ಳುತ್ತೇವೆ. ಅನ್ನ-ಸಾಂಬಾರು ಗ್ರಾಹಕರು ಕೇಳಿದಷ್ಟು ನೀಡುತ್ತೇವೆ ಎನ್ನುತ್ತಾರೆ.