ಮಂಡ್ಯ: ಬೃಹತ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಮಂಡ್ಯ ಎಸ್ಪಿ ರಾಧಿಕಾ ನೇತೃತ್ವದ ಪೊಲೀಸ್ ತಂಡ ದಾಳಿ ಮಾಡಿದ್ದು 22 ಮಂದಿಯನ್ನು ಬಂಧಿಸಿದ್ದು 7 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.
ಇಂದು ಪೊಲೀಸರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ನಗುವನಳ್ಳಿ ಗೇಟ್ ನ ಡಾಬಾವೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಬಾಂಗ್ಲಾ, ಮುಂಬೈ ಮತ್ತು ಕೊಲ್ಕತ್ತಾ ಮೂಲದ ಮಹಿಳೆಯರನ್ನು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಕಳೆದ 10 ವರ್ಷಗಳ ಹಿಂದೆ ಇದೇ ಡಾಬಾದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಆನಂತರ ಮತ್ತೆ ಮಾಂಸ ದಂಧೆ ಶುರುಮಾಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಎಸ್ಸಿಯೇ ನೇರವಾಗಿ ದಾಳಿಗೆ ಇಳಿದ್ದಿದ್ದರು.