ಕೆರೆಯಲ್ಲಿ ಬೆಳೆದಿರುವ ಸಸಿ ತೆಗೆಯಬೇಕು ಮತ್ತು ಕೆರೆಗೆ ಬಿಡಲಾಗುತ್ತಿರುವ ಮುನ್ಸಿಪಲ್ ಘನ ತ್ಯಾಜ್ಯ, ವಾಣಿಜ್ಯ, ದೇಶೀಯ ಮತ್ತು ಇತರ ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂದು ಈ ಹಿಂದೆ ಎನ್ಜಿಟಿ ಹೇಳಿತ್ತು. ಜತೆಗೆ ಕೆರೆಯ ಸುತ್ತಮುತ್ತಲಿನ ಎಲ್ಲಾ ವಸತಿ ಸಂಕೀರ್ಣಗಳಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಕೊಳಚೆನೀರಿನ ಸಂಸ್ಕರಣಾ ಘಟಕಗಳ(ಸಾಮರ್ಥ್ಯ, ತಂತ್ರಜ್ಞಾನ ಮತ್ತು ಮಾನದಂಡಗಳನ್ನು) ನವೀಕರಣದ ವಿವರಗಳನ್ನು ಕೋರಿತ್ತು. ಈ ಎಲ್ಲ ಕಾರ್ಯಗಳನ್ನು ಖುದ್ದು ಪರಿಶೀಲಿಸುವಂತೆ ಹಿರಿಯ ಅಧಿಕಾರಿಗೆ ಎನ್ಜಿಟಿ ಸೂಚಿಸಿದೆ. ಅಲ್ಲದೆ ಸೆಪ್ಟೆಂಬರ್ 8ರಂದು ನಡೆಯಲಿರುವ ವಿಚಾರಣೆಗೂ ಮುನ್ನ ವರದಿ ನೀಡುವಂತೆ ಸೂಚಿಸಿದೆ.