ಇಬ್ಬರು ಕೇಂದ್ರ ಸಚಿವರು ಇಂದು ಕಾರ್ಮಿಕ ಇಲಾಖೆಯು ಕಾರ್ಮಿಕ ಭವಿಷ್ಯನಿಧಿ ಸಂಘದ ಸದಸ್ಯರೊಂದಿಗೆ ಐಟಿಐ ಕ್ರಿಕೆಟ್ ಗ್ರೌಂಡ್ ನಿಂದ ಇಂಡಿಯನ್ ಟೆಲೆಫೋನ್ ಇಂಡಸ್ಟ್ರೀವರೆಗೆ ತಿರಂಗ ಯಾತ್ರೆ ನಡೆಸಿದರು. ಬಳಿಕ ಮಾತನಾಡಿದ ದತ್ತಾತ್ರೆಯ ಅವರು, ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಕೂಗಿದ್ದರು. ಇಂದು ನಾವು ಭ್ರಷ್ಟಾಚಾರ, ಜಾತೀಯತೆ, ಕೋಮುವಾದವನ್ನು ಭಾರತ ಬಿಟ್ಟು ತೊಲಗಿಸುವುದಕ್ಕಾಗಿ ಸಂಕಲ್ಪ ಮಾಡಬೇಕಿದೆ ಎಂದರು.