ಇದಾಗ ಬಳಿಕ ಮೂವರು ಕುಳಿತು ಮದ್ಯಪಾನ ಮಾಡಿದ್ದರೆ. ಈ ವೇಳೆ ಉದಯ್ ಇಲ್ಲಿಯೇ ಇರುವಂತೆ ವಿಠಲ್ ಹೇಳಿದಾಗ ಅದಕ್ಕೆ ರಾಜು ಕೆಟ್ಟದಾಗಿ ಮಾತನಾಡಿದ್ದಾನೆ. ಈ ವೇಳೆ ಮತ್ತೆ ರಾಜು ಮತ್ತು ಉದಯ್ ನಡುವೆ ಮಾತಿನ ಜಗಳ ಶುರುವಾಗಿದೆ. ಕುಡಿದ ಅಮಲಿನಲ್ಲಿ ರಾಜು ಉದಯ್ ನನ್ನು ತಳ್ಳಿದ್ದಾನೆ. ಉದಯ್ ಆಯಾ ತಪ್ಪಿ ಮೊದಲ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಈ ಘಟನೆ ಸಂಬಂಧ ಪೊಲೀಸರು ರಾಜುನನ್ನು ಬಂಧಿಸಿದ್ದಾರೆ.