ಜೈಲಿಗೆ ಸೇರುವ ಮುನ್ನವೇ ನಾನು ಪದವೀಧರನಾಗಿದ್ದೆ. ನಂತರ ನಾನು ಪತ್ರಿಕೋಧ್ಯಮ, ಅರ್ಥಶಾಸ್ತ್ರ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದೇನೆ. ನನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ನನಗೆ ಖೇದವಿದೆ. ಅದನ್ನೆಲ್ಲಾ ಈಗ ಮರೆತಿದ್ದೇನೆ. ಮೊದಲಿಗೆ ಜೈಲಿಗೆ ಬಂದಾಗ ನಾನು ಜೈಲಿನಲ್ಲಿದ್ದ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದೆ ನಂತರ ಅದೇ ಅಭ್ಯಾಸವಾಗಿ ಬಿಟ್ಟಿತು. ನಂತರ ಅಧಿಕಾರಿಗಳ ಸಹಾಯದಿಂದಾಗಿ ನನಗೆ ಸ್ನಾತಕೋತ್ತರ ಪದವಿಗೆ ಪ್ರವೇಶ ಸಿಕ್ಕಿತು. ಇದೀಗ ನಾನು ಮೂರು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದೇನೆ ಎಂದು ನರಸಿಂಹ ರೆಡ್ಡಿ ಹೇಳಿದ್ದಾರೆ.