ಪರೇಶ್ ಮೇಸ್ತಾನದ್ದು ಹತ್ಯೆ, ಆದರೆ ಪೊಲೀಸರು ಅದನ್ನು ಮುಚ್ಚಿಹಾಜಲು ಯತ್ನಿಸುತ್ತಿದ್ದಾರೆ. ಸಚಿವ ದೇಶಪಾಂಡೆ ಹಾಗೂ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ವಿರುದ್ಧವೂ ಆರೋಪ ಮಾಡಿರುವ ಕಮಲಾಕರ್ ಮೇಸ್ತಾ, ಇಬ್ಬರೂ ಗೊಂದಲ ಉಂಟು ಮಾಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪೊಲೀಸ್ ತನಿಖೆ ಮೇಲೆ ನಮಗೆ ವಿಶ್ವಾಸವಿಲ್ಲ. ನಮಗೆ ನ್ಯಾಯ ಬೇಕು ಎಂದು ಹೇಳಿದ್ದು, ಪರೇಶ್ ಮೇಸ್ತಾ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ಆತನೊಬ್ಬ ಧೈರ್ಶಶಾಲಿ ಹಿಂದೂ ಆಗಿದ್ದ ಎಂದು ಹೇಳಿದ್ದಾರೆ.