ಜೈಲಿನಲ್ಲಿ ಲಂಚ ಪಡೆದು ಖೈದಿಗಳಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ಆರೋಪಿಸಿ ರೂಪಾ ಅವರು ಎಸಿಬಿ ಗೆ ದೂರು ನೀಡಿದ್ದರು. ಆಗಸ್ಟ್ ನಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರೂ ಸಹ ಇದುವರೆಗೆ ಪ್ರಕರಣದ ಬೆಳವಣಿಗೆ ಬಗೆಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ಇದಕ್ಕಾಗಿ ರೂಪ ಅವರು ಇದೀಗ ಈ ಸಂಬಂಧ ಮಾಹಿತಿ ನೀಡುವಂತೆ ಕೋರಿ ಆರ್ ಟಿಐ ಅರ್ಜಿ ಸಲ್ಲಿಸಿದ್ದಾರೆ.