ಬೆಂಗಳೂರು: ಯಲಿಯೂರು ಮತ್ತು ಮೈಸೂರು ನಡುವಿನ 39 ಕಿಮೀ ಎಲೆಕ್ಟ್ರಿಫೈಡ್ ವಿಭಾಗದಲ್ಲಿ ರೈಲುಗಳನ್ನು ಓಡಿಸಲು ರೈಲ್ವೆ ಸುರಕ್ಷತಾ ಆಯೋಗ (ಸಿಆರ್ ಎಸ್)ಅನುಮತಿ ನೀಡಿದೆ. ಇದರಿಒಡನೆ ಬೆಂಗಳೂರು ಮತ್ತು ಮೈಸೂರು ನಡುವೆರೈಲುಗಳ ಸಂಚಾರದ ವೇಗ ಹೆಚ್ಚಳವಾಗಲಿದೆ. ರೈಲ್ವೆ ಸಚಿವ ಪಿಯೂಷ್ ಗೋಯಲ್ ಡಿಸೆಂಬರ್ 26 ರಂದು ಬೆಂಗಳೂರು ಮತ್ತು ಮೈಸೂರು ನಡುವಿನ ವಿದ್ಯುಚ್ಛಕ್ತಿ ಚಾಲಿತ ರೈಲು ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಮೂಲಕ ಚೆನ್ನೆ, ಮೈಸೂರುಗೆ ಹೋಗುವ ಶತಾಬ್ದಿ ಎಕ್ಸ್ ಪ್ರೆಸ್ ಆ ದಿನದಿಂದ ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲಿದೆ.