ದಂಪತಿಯ ನಡುವಿನ ಕಲಹದಿಂದಾಗಿ 6 ವರ್ಷದ ಮಗ ಚಿಕ್ಕಮಗಳೂರಿನಲ್ಲಿ ವಸತಿ ಶಾಲೆಯಲ್ಲಿ ಓದುವ ಪರಿಸ್ಥಿತಿ ಬಂದಿದ್ದು, ಈ ಕೇಸಿನ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದ್ದಾರೆ. ಕ್ರಿಸ್ ಮಸ್ ಮತ್ತು ಚಳಿಗಾಲದ ರಜೆಯಲ್ಲಿ ತಮ್ಮ ಬಳಿ ಮಗ ಇರಬೇಕೆಂದು ಪೋಷಕರಿಬ್ಬರೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಬಾಲಕನ ತಂದೆ ಮತ್ತು ತಾಯಿಯ ಪರ ಕೋರ್ಟ್ ನಲ್ಲಿ ವಕಾಲತ್ತು ವಹಿಸುವ ವಕೀಲರು ವೃತ್ತಿಪರರಾಗಿ ವರ್ತಿಸುವುದಕ್ಕೆ ಬದಲು ಪೋಷಕರಾಗಿ ಮಾನವೀಯತೆ ತೋರುವಂತೆ ಹೇಳಿದರು.