ತನ್ನ ಸ್ಕೂಟರ್ ನಲ್ಲಿ ಬಲೂನ್ ಮತ್ತು ಉಡುಗೊರೆಗಳನ್ನು ಹೊತ್ತು ತರುತ್ತಾರೆ. ಶಾಲೆ, ಮನೆ, ಆಸ್ಪತ್ರೆಯೆಂದು 400 ಕಿಲೋ ಮೀಟರ್ ನಷ್ಟು ಪ್ರತಿವರ್ಷ ತನ್ನ ಗಾಡಿಯಲ್ಲಿ ಸಾಗುತ್ತಾರೆ. ಮಿಠಾಯಿಗಳನ್ನು ಕೊಡುವುದು ಮಾತ್ರವಲ್ಲದೆ ಕ್ರಿಸ್ ಮಸ್ ನಲ್ಲಿ ಸಂದೇಶಗಳನ್ನು ಕೂಡ ಪಸರಿಸುತ್ತಾರೆ. ನಿಮ್ಮ ಶತ್ರುಗಳನ್ನು ಪ್ರೀತಿಸಿ ಮತ್ತು ಅವರನ್ನು ಕ್ಷಮಿಸಿ. ನಮ್ಮ ಜೀವನದಲ್ಲಿ ನಿಜವಾದ ಶತ್ರುಗಳಿಲ್ಲ ಎನ್ನುತ್ತಾರೆ ಬೆಳ್ತಂಗಡಿಯ ಕೊಕ್ಕಡದ ಸ್ಥಳೀಯ ಸಂತ ವಿನ್ಸೆಂಟ್ ಮೆನೆಜೆಸ್.