ಹೊಮೆನ್ ಬೋರ್ಗೋಹೈನ್ ಅವರು ಶಿಕ್ಷಕರಾಗಿ, ಪತ್ರಕರ್ತರಾಗಿ ಯಶಸ್ವಿಯಾಗಿದ್ದು ಸಾಹಿತ್ಯ ಕ್ಷೇತ್ರದಲ್ಲಿಸಹ ಅಪಾರ ಯಶಸ್ಸು ಸಂಪಾದಿಸಿದ್ದಾರೆ. ಸಮಾಜದ ಎಲ್ಲ ವರ್ಗದವರನ್ನು ಒಳಗೊಂಡಿರುವ ಇವರ ರಚನೆಗಳು ಮಾನವೀಯ ಮೌಲ್ಯ, ನೈತಿಕತೆ, ವೈಚಾರಿಕತೆಯನ್ನು ತನ್ನಲ್ಲಿ ಅಡಕವಾಗಿಸಿಕೊಂಡಿದೆ. ಸ್ವಂತ ಬದುಕಿನ ಅನುಭವದ ಹಿನ್ನೆಲೆಯಲ್ಲಿ ಮೂಡಿದ ಅವರ ಸಾಹಿತ್ಯ ಕೃತಿಗಳು ಅಸ್ಸಾಂನ ಜನಮಾನಸಗಳಲ್ಲಿ ಸಾಕಷ್ಟು ಹೆಸರಾಗಿವೆ. ಇವರ 'ಪಿತಪುತ್ರ' ಕಾದಂಬರಿಗೆ 978ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ.