ಭಾರತದ ಪುರಾತನ ಜ್ಞಾನವನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ಹೇಳಿದ ದಲೈಲಾಮ ಅದು ಇಂದಿನ ಜಗತ್ತಿಗೆ ಅಗತ್ಯ ಕೂಡ ಆಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಹಲವು ಅಭಿವೃದ್ಧಿಗಳಾಗಿವೆ. ಸಾವಿರ ವರ್ಷಗಳ ಇತಿಹಾಸ, ಸಂಪ್ರದಾಯಗಳಿರುವ ಭಾರತ ದೇಶ, ಭಾವನೆಗಳ ಜೊತೆ ಹೇಗೆ ಸ್ಪಂದಿಸಬೇಕು ಎಂಬುದನ್ನು ಕಲಿಸುತ್ತದೆ ಎಂದರು.