ಯಾವುದೇ ಆತ್ಮಹತ್ಯೆ ನೋಟುಗಳನ್ನು ವೀರಭದ್ರ ಬರೆದಿಟ್ಟಿಲ್ಲ. ಮೊನ್ನೆ ಶನಿವಾರ ಕುಮಾರಸ್ವಾಮಿ ಲೇ ಔಟ್ ನಲ್ಲಿರುವ ತನ್ನ ಅತ್ತೆ ಮನೆಗೆ ಹೋಗಿದ್ದ ಸಂದರ್ಭದಲ್ಲಿ ವೀರಭದ್ರಗೆ ಪತ್ನಿಯ ಜೊತೆ ಜಗಳವಾಗಿತ್ತು. ಕೆಲ ತಿಂಗಳ ಹಿಂದೆ ವೀರಭದ್ರ ಅವರಿಂದ ಬೇರ್ಪಟ್ಟು ತವರು ಮನೆಗೆ ಹೋಗಿದ್ದ ಶಕುಂತಲಾಳನ್ನು ವಾಪಸ್ ಕರೆಸಲೆಂದು ಪೊಲೀಸರ ಮೂಲಕ ರಾಜಿ ಸಂಧಾನ ಮಾಡಲು ವೀರಭದ್ರ ಹೋಗಿದ್ದರು. ಮನೆಗೆ ವಾಪಸ್ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀರಭದ್ರ ಪೊಲೀಸ್ ಠಾಣೆಯಲ್ಲಿ ಪತ್ನಿಗೆ ಬೆದರಿಕೆ ಕೂಡ ಹಾಕಿದ್ದರು.