ಬೆಂಗಳೂರು: ರಾಜ್ಯ ಸರ್ಕಾರ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಸನ್ನಡತೆ ಆಧಾರದ ಮೇಲೆ ರಾಜ್ಯದ ವಿವಿಧ ಜೈಲಿನಲ್ಲಿರುವ 144 ಕೈದಿಗಳನ್ನು ಗುರುವಾರ ಬಿಡುಗಡೆ ಮಾಡುತ್ತಿದೆ.
ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ 60 ಕೈದಿಗಳು, ಮೈಸೂರಿ 23 ಹಾಗೂ ಬೆಳಗಾವಿ 17 ಕೈದಿಗಳು ಸೇರಿದಂತೆ ಒಟ್ಟು 144 ಕೈದಿಗಳನ್ನು ನಾಳೆ ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾಡಲಾಗುವುದು ಎಂದು ಬಂಧಿಖಾನೆ ಐಜಿಪಿ ಸತ್ಯನಾರಾಯಣ ರಾವ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.