ವಿದ್ಯಾರ್ಥಿಗಳ ಪೋಷಕರೆಂದು ಶಾಲಾ-ಕಾಲೇಜುಗಳ ಆವರಣಕ್ಕೆ ಬರುವ ಅನಧಿಕೃತ ವ್ಯಕ್ತಿಗಳು, ನಂತರ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಶಾಲಾ-ಕಾಲೇಜುಗಳ ಆವರಣವನ್ನು ಸೂಕ್ಷ್ಮವಲಯವೆಂದು ಘೋಷಣೆ ಮಾಡಿ, ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಬರುವ ಪೋಷಕರು ಕೂಡ ಅನುಮತಿ ಪಡೆದುಕೊಂಡು ಬರುವಂತೆ ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ. ಮಕ್ಕಳನ್ನು ಭೇಟಿಯಾಗಲು ಬರುವ ಪೋಷಕರಿಗೆ ಭೇಟಿಗೆಂದೇ ಸಮಯವನ್ನು ನಿಗದಿ ಮಾಡಲಾಗುತ್ತದೆ. ಮಕ್ಕಳು, ಶಿಕ್ಷಕರು, ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಗಳ ಸಿಬ್ಬಂದಿಗಳನ್ನು ಭೇಟಿಯಾಗಲು ಬರುವ ವ್ಯಕ್ತಿಗಳು ನಿಗದಿತ ಸಮಯದಲ್ಲಿಯೇ ಬಂದು ಭೇಟಿ ಮಾಡಲು ಸುತ್ತೋಲೆ ಹೊರಡಿಸಲಾಗುತ್ತದೆ.