ಮಂಡ್ಯ: ಸಂಸದ ಸಿ.ಎಸ್. ಪುಟ್ಟರಾಜು ಸಂಸ್ಥೆಗೆ ದಂಡ ವಿಧಿಸಿದ್ದ ಭೂ ವಿಜ್ಞಾನಿ ವರ್ಗಾವಣೆ!

ಮಂಡ್ಯ ಸಂಸದ ಸಿ.ಎಸ್ ಪುಟ್ಟರಾಜು ಸೇರಿದಂತೆ 11 ಕಲ್ಲು ಕ್ರಷರ್ ಘಟಕಗಳಿಗೆ ದಂಡ ವಿಧಿಸಿದ್ದ ಹಿರಿಯ ಭೂ ವಿಜ್ಞಾನಿ ಕೆ.ಎಂ ನಾಗಭೂಷಣ್...
ಸಿ.ಎಸ್. ಪುಟ್ಟರಾಜು
ಸಿ.ಎಸ್. ಪುಟ್ಟರಾಜು
ಮೈಸೂರು: ಮಂಡ್ಯ ಸಂಸದ ಸಿ.ಎಸ್ ಪುಟ್ಟರಾಜು ಸೇರಿದಂತೆ 11 ಕಲ್ಲು ಕ್ರಷರ್ ಘಟಕಗಳಿಗೆ ದಂಡ ವಿಧಿಸಿದ್ದ ಹಿರಿಯ ಭೂ ವಿಜ್ಞಾನಿ ಕೆ.ಎಂ ನಾಗಭೂಷಣ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಪಾಂಡವಪುರ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಕೆ.ಎಂ ನಾಗಭೂಷಣ್ 48 ಮಂದಿ  ವಿರುದ್ಧ ದೂರು ದಾಖಲಿಸಿದ್ದರು.
ಕೆ.ಎಂ ನಾಗಭೂಷಣ್ ಅವರ ವರ್ಗಾವಣೆ ರಾಜಕೀಯ ಸರ್ಕಲ್ ನಲ್ಲಿ ಹಲವರ ಹುಬ್ಬೇರುವಂತೆ ಮಾಡಿದೆ.
ಅಕ್ರಮ ಕಲ್ಲು ಗಣಿಗಾರಿಕೆ ಸಂಬಂಧ ಪರಿಶೀಲನೆ ನಡೆಸಲು ತೆರಳಿದ್ದಾಗ ಸಂಸದ ಪುಟ್ಟರಾಜು ನಮ್ಮನ್ನು ತಡೆದಿದ್ದರು ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಆರೋಪಿಸಿದ್ದರು.
ಸಂಸದ ಪುಟ್ಟರಾಜು ಅವರಿಂದ ಬೆದರಿಕೆ ಎಂದು ಹೇಳಿದ್ದ ಅವರು ಪೊಲೀಸರ ರಕ್ಷಣೆ ಕೋರಿದ್ದರು.  ಈ ವೇಳೆ ನಾಗಭೂಷಣ್ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಸಂಸದ ಪುಟ್ಟರಾಜು ಆರೋಪಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com