ಮೈಸೂರು ದಸರಾ 2017: ಸರಳ, ದುರ್ಗಾ ಪರಮೇಶ್ವರಿಗೆ ವಿಶ್ರಾಂತಿ, ಅರ್ಜುನನಿಗೆ ಅಂಬಾರಿ ಹೊಣೆ!

ಪ್ರಸಕ್ತ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಆನೆಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಬಾರಿಯೂ ಅರ್ಜುನ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಪ್ರಸಕ್ತ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಆನೆಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಬಾರಿಯೂ ಅರ್ಜುನ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ.

ಮೈಸೂರು ಅರಣ್ಯಾಧಿಕಾರಿಗಳ ತಂಡ ದಸರೆಗಾಗಿ ಒಟ್ಟು 15 ಆನೆಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಕಳೆದ ವರ್ಷದ ಉಚ್ಸವದಲ್ಲಿ ಪಾಲ್ಗೊಂಡಿದ್ದ ಸರಳ, ದುರ್ಗಾ ಪರಮೇಶ್ವರಿ ಆನೆಗಳಿಗೆ ಈ ಬಾರಿ ವಿಶ್ರಾಂತಿ ನೀಡಲು  ನಿರ್ಧರಿಸಲಾಗಿದೆ. ಸರಳ, ದುರ್ಗಾ ಪರಮೇಶ್ವರಿ ಆನೆಗಳು ಗರ್ಭಧರಿಸಿದ್ದು ಇದೇ ಕಾರಣಕ್ಕೆ ಈ ಬಾರಿ ದಸರೆಯಿಂದ ವಿಶ್ರಾಂತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದಂತೆ ಕಳೆದ ಸಾಲಿನಂತೆಯೇ ಈ  ಬಾರಿಯೂ ಅರ್ಜುನ ಆನೆ ಅಂಬಾರಿ ಹೊರಲಿದ್ದು, ಉಳಿದಂತೆ ಬಲರಾಮ, ಅಭಿಮನ್ಯು ಮತ್ತು ಗೋಪಾಲವಾಮಿ, ದುಬಾರೆ ಆನೆ ಶಿಬಿರದಲ್ಲಿರುವ ಕಾವೇರಿ, ವಿಜಯ, ವಿಕ್ರಮ್, ಗೋಪಿ, ಹರ್ಷ ಮತ್ತು ಪ್ರಶಾಂತ, ಗಜೇಂದ್ರ ದಸರೆಯಲ್ಲಿ  ಪಾಲ್ಗೊಳ್ಳಲಿವೆ.

ಅಂತೆಯೇ ಈ ವರ್ಷ 4 ಹೊಸ ಆನೆಗಳನ್ನು ಉತ್ಸವಕ್ಕೆ ಆಯ್ಕೆ ಮಾಡಲಾಗಿದ್ದು, ಈ ಬಾರಿ ಕೃಷ್ಣ, ದ್ರೋಣ ಮತ್ತು ಭೀಮಾ ಮತ್ತು ವರಲಕ್ಷ್ಮಿ ಎಂಬ ಆನೆಗಳನ್ನು ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಡಿಸಿಎಫ್ (ವನ್ಯಜೀವಿ ) ವಿ. ಏಡುಕೊಂಡಲು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com