ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬೆಂಗಳೂರು ನಗರ ಜಿಲ್ಲಾ ಸರ್ಜನ್ ಡಾ.ಅನ್ಸರ್ ಅಹ್ಮದ್, ನಮಗೆ ಸರಿಯಾದ ಮಾಹಿತಿ ಇದೇ 5ನೇ ತಾರೀಖಿನಂದು ಸಿಗಲಿದೆ. ಅಂದು ನಮ್ಮ ವೇತನ ಸಿಗುವ ದಿನವಾಗಿದೆ. ನನಗೆ ಜಯನಗರ ಜನರಲ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಕೆ.ಆರ್.ಪುರಂ ಜನರಲ್ ಆಸ್ಪತ್ರೆ, ಯಲಹಂಕ ಜನರಲ್ ಆಸ್ಪತ್ರೆ, ಸಿ.ವಿ.ರಾಮನ್ ಜನರಲ್ ಆಸ್ಪತ್ರೆ ಮತ್ತು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಿಂದ ಸಿಕ್ಕಿರುವ ಖಚಿತ ಮಾಹಿತಿ ಪ್ರಕಾರ, ಅವರು ಖಾಸಗಿ ಔಷಧಾಲಯಗಳಿಂದ ರೋಗಿಗಳಿಗೆ ಔಷಧ ಬರೆದುಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ ಎಂದರು.