ಆಸ್ತಿ ವಿವಾದ: ತಾಯಿಯನ್ನು ಜೀವಂತವಾಗಿ ಸುಡಲು ಯತ್ನಿಸಿದ ಮಗ

ಒಂದೂವರೆ ಎಕರೆ ಜಮೀನಿಗಾಗಿ ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಜೀವಂತವಾಗಿ ಸುಡಲು ಯತ್ನಿಸಿದ ಘಟನೆ ಬೆಳ್ತಂಗಡಿ ಸಮೀಪದ ನೆತ್ತಾರ್..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಂಗಳೂರು: ಒಂದೂವರೆ ಎಕರೆ ಜಮೀನಿಗಾಗಿ ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಜೀವಂತವಾಗಿ ಸುಡಲು ಯತ್ನಿಸಿದ ಘಟನೆ ಬೆಳ್ತಂಗಡಿ ಸಮೀಪದ ನೆತ್ತಾರ್ ಕೊಡಿನೇರ್ ನಲ್ಲಿ ನಡೆದಿದೆ.
ಹರೀಶ್ ಗೌಡ ಮತ್ತು ಆತನ ಪತ್ನಿ ದಿವ್ಯಪ್ರಭ ತಮ್ಮ ಭಾಗದ ಜಮೀನನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿದ್ದಾರೆ.
ಆಸ್ತಿ ವಿವಾದ ನ್ಯಾಯಾಲಯದಲ್ಲಿತ್ತು. ಜಮೀನಿನ ಮೇಲೆ ಹರೀಶ್ ಪೋಷಕರು ಬೌಂಡರಿ ಹಾಕಲು ನಿರ್ಧರಿಸಿದ್ದರು, ಇದರಿಂದ ಕೋಪಗೊಂಡ ಹರೀಶ್ ಹೆಂಡತಿ ದಿವ್ಯಪ್ರಭ ಜೊತೆ ಸೇರಿ ತಾಯಿಯ ಮೇಲೆ ಪೆಟ್ರೋಲ್ ಸುರಿದು ಹತ್ಯೆ ಮಾಡಲು ಯತ್ನಿಸಿದ್ದಾನೆ.
ಈ ವೇಳೆ ಹರೀಶ್ ತಾಯಿ ರಾಧಮ್ಮ ಜೋರಾಗಿ ಕಿರುಚಿಕೊಂಡಿದ್ದಾರೆ. ರಾಧಮ್ಮ ಸಹಾಯಕ್ಕಾಗಿ ಆಕೆ ಪತಿ ಮತ್ತು ನೆರೆಹೊರೆಯವರು ಧಾವಿಸಿದ್ದಾರೆ. ಈ ವೇಳೆ ಹರೀಶ್ ಮತ್ತು ಆತನ ಪತ್ನಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com