ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚೌಧರಿ ಸಹೋದರರ ಪೋಷಕರು ವಿಜಯ್ ನಿಶಾಂತ್ ಎಂಬ ವೈದ್ಯರನ್ನು ಸಂಪರ್ಕಿಸಿ ಬೇರುಗಳಿಂದ ಕಟ್ಟಡಕ್ಕೆ ಹಾನಿಯುಂಟಾಗದಂತೆ ಹಾಗೂ ಮರ ಉಳಿದುಕೊಳ್ಳುವಂತಹ ಪರಿಹಾರ ಸೂಚಿಸಲು ಕೇಳಿದರು. ಕೊನೆಗೂ ಬೇರುಗಳು ಬೆಳೆಯದಂತೆ ತಡೆಗಟ್ಟುವ ವ್ಯವಸ್ಥೆಯ ಪರಿಹಾರ ದೊರೆಯಿತು. ಈ ವ್ಯವಸ್ಥೆಯನ್ನು ಅಳವಡಿಸಲು ಅಗತ್ಯವಿದ್ದ ಹಣವನ್ನು ಮನೆಮನೆಗೆ ತೆರಳಿ ಅಭಿಯಾನದ ಮೂಲಕ ಸಂಗ್ರಹಿಸಿದ ಪಾರ್ಥ್ ಹಾಗೂ ಅರ್ಜುನ್ ಚೌಧರಿ ಸಹೋದರರು ಸ್ವತಃ ಪಾಕೆಟ್ ಮನಿಯಿಂದ 2,000 ರೂ ಹಣ ನೀಡಿ ಒಟ್ಟು 7,040 ರು ಹಣ ಸಂಗ್ರಹಿಸಿ ರೂಟ್ ಬ್ಯಾರಿಯರ್ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಇಬ್ಬರು ಸಹೋದರರ ಈ ಕೆಲಸಕ್ಕೆ ಅಪಾರ್ಟ್ ಮೆಂಟ್ ನ ನಿವಾಸಿಗಳೂ ಕೈ ಜೋಡಿಸಿದ್ದು, ಒಟ್ಟು 25,000 ರೂಪಾಯಿ ವೆಚ್ಚದಲ್ಲಿ ರೂಟ್ ಬ್ಯಾರಿಯರ್ ವ್ಯವಸ್ಥೆಯನ್ನು ಅಳವಡಿಸುವ ಯೋಜನೆಗೆ ಸಹಕರಿಸಿದ್ದಾರೆ.