ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಮಗಳ ಓದಿಗೆ ಫೀಸ್ ಕಟ್ಟಲಾಗದೆ ಮನನೊಂದ ತಂದೆ ಆತ್ಮಹತ್ಯೆ

ಮಗಳ ಕಾಲೇಜಿಗೆ ಫೀಸ್ ಕಟ್ಟಲಾಗದೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಮೈಸೂರಿನಲ್ಲಿ ...
ಮೈಸೂರು: ಮಗಳ ಕಾಲೇಜಿಗೆ ಫೀಸ್ ಕಟ್ಟಲಾಗದೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ.
51 ವರ್ಷದ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡವರು. ಇವರು ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿಯಾಗಿದ್ದು, ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ಪ್ರಸಾದ ತಯಾರಕರಾಗಿದ್ದರು. ಒಬ್ಬ ಮಗ ಹಾಗೂ ಮಗಳ ಜೊತೆ  ವಾಸವಿದ್ದರು.
ಮಗಳ ಓದಿಗಾಗಿ 12,500 ರೂ. ಕಾಲೇಜು ಫೀಸ್ ಕಟ್ಟಬೇಕಿತ್ತು. ಆದ್ರೆ ಹಣ ಹೊಂದಿಸಲು ಸಾಧ್ಯವಾಗದೆ ದೇವಸ್ಥಾನದ ಆವರಣದಲ್ಲಿನ ಮನೆಯಲ್ಲಿಯೇ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಇತ್ತೀಚೆಗಷ್ಟೇ ಗಂಗಾಧರ್ ಕೆಲಸಕ್ಕೆ ಸೇರಿದ್ದರು. ಹೀಗಾಗಿ ದೇವಾಸ್ಥಾನ ಆಡಳಿತ ಮಂಡಳಿಗೆ ಗಂಗಾಧರ್ ಸಮಸ್ಯೆಯ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ವಿನಾಯಕ ಮಂಡಳಿ ಸದಸ್ಯರು ಸ್ವಯಂ ಪ್ರೇರಿತರಾಗಿ ಹಣ ನೀಡಿ ಗಂಗಾಧರ್ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1.5 ಲಕ್ಷ ರು ಹಣ ನೀಡಲು ನಿರ್ಧರಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com