ಕಳೆದ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಯಿಂದ ಎಚ್ಚೆತ್ತಿರುವ ಪದವಿ ಪೂರ್ವ ಶಿಕ್ಷಣ ಮಂಡಳಿ ಈ ವರ್ಷ ಅಂತಹ ಘಟನೆ ಪುನರಾವರ್ತೆನೆಯಾಗದಂತೆ ಪ್ರಶ್ನೆ ಪತ್ರಿಕೆಗಳ ಮುದ್ರಣದಿಂದ ಹಿಡಿದು ಹಂಚಿಕೆಯವರೆಗೂ ತೀವ್ರ ನಿಗಾ ವಹಿಸಿತ್ತು. ಕರ್ನಾಟಕ ಸುರಕ್ಷತಾ ಪರೀಕ್ಷಾ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಜಿಲ್ಲಾ ಖಜಾನೆಗಳಿಗೆ ಸಿಸಿಟಿವಿ, ಮ್ಯಾಗ್ನೆಟಿಕ್ ಡೋರ್ಗಳು, ಬಯೋ ಮೆಟ್ರಿಕ್ ಪದ್ಧತಿ ಸೇರಿದಂತೆ ಇನ್ನಿತರ ಅತಿ ಉನ್ನತ ಮಟ್ಟದ ಭದ್ರತೆ ಅಳವಡಿಸಲಾಗಿದೆ.