ನನ್ನ ಪತ್ನಿ ಪ್ರಸಾದ ನಿಲಯದ ಕೊಂಚ ದೂರದಲ್ಲಿರುವ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆಕೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪತ್ನಿ ಆಸ್ಪತ್ರೆಗೆ ದಾಖಲಾದ ದಿನದಿಂದಲೂ ನಾವೂ ಇಲ್ಲಿಯೇ ಊಟವನ್ನು ಮಾಡುತ್ತಿದ್ದೇವೆ. ಊಟದ ರುಚಿ ಬಹಳ ಚೆನ್ನಾಗಿದ್ದು, ಆರೋಗ್ಯಕರ ಆಹಾರವನ್ನು ನೀಡುತ್ತಿದ್ದಾರೆ. ಪತ್ನಿಯನ್ನು ಟ್ರಸ್ಟ್ ಸದಸ್ಯರೇ ನೋಡಿಕೊಳ್ಳುತ್ತಿದ್ದಾರೆಂದು ಮಲ್ಲಸಮುದ್ರ ಗ್ರಾಮದ ನಿವಾಸಿ ಮಾರುತಿ ಕಲ್ಸಾನ್ನವರ್ ಅವರು ಹೇಳಿದ್ದಾರೆ.