ಪೊಲೀಸರ ಪ್ರಕಾರ, ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ರೋಹಿತ್ ರೂಂನಲ್ಲಿದ್ದಾಗ ಕೂಡಿದು ಬಂದಿದ್ದ ರವಿಶ್ ಶೌಚಾಲಯಕ್ಕೆ ಹೋಗಿ ಬಾಗಿಲು ಮುಚ್ಚದೆ ಹಾಗೆ ಬಂದಿದ್ದ. ಇದರಿಂದ ಅಸಮಾಧಾನಗೊಂಡ ರೋಹಿತ್ ಶೌಚಾಲಯದ ಬಾಗಿಲು ಮುಚ್ಚು, ಅದರ ಕೆಟ್ಟ ವಾಸನೆಯಿಂದ ಇತರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತೆ ಎಂದು ಹೇಳಿದ್ದಾನೆ. ಆದರೆ ಬಾಗಿಲು ಮುಚ್ಚಲು ರವಿಶ್ ನಿರಾಕರಿಸಿದ್ದಾನೆ. ಇದರಿಂದಾಗಿ ಇಬ್ಬರ ಮಧ್ಯ ಜಗಳ ನಡೆದಿದ್ದು, ಆ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.