ಬೆಂಗಳೂರು: ಪೂಜೆ ನೆಪದಲ್ಲಿ ಬಂದು ಕಳ್ಳತನ ಮಾಡಿದ್ದ ಪೂಜಾರಿ ಬಂಧನ

ಒಂಟಿ ಮಹಿಳೆಯೊಬ್ಬರ ಮನೆಯಲ್ಲಿ ಪೂಜೆ ಮಾಡುವುದಾಗಿ ಬಂದು ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿದ್ದ 25 ವರ್ಷದ ಪೂಜಾರಿಯನ್ನು ಪೊಲೀಸರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒಂಟಿ ಮಹಿಳೆಯೊಬ್ಬರ ಮನೆಯಲ್ಲಿ ಪೂಜೆ ಮಾಡುವುದಾಗಿ ಬಂದು ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿದ್ದ 25 ವರ್ಷದ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನ ಮೂಲದ ಚೇತನ್ ಶರ್ಮಾ ಬಂಧಿತ ಆರೋಪಿ, ಒಂಟಿ ಮಹಿಳೆಯ ಫೋನ್ ನಂಬರನ್ನು ಹೇಗೋ ಸಂಗ್ರಹಿಸಿದ ಚೇತನ್, ಪೂಜೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಮನವೊಲಿಸಿದ್ದಾನೆ.

ನಂತರ ಮನೆಗೆ ಬಂದು ಪೂಜೆ ಮಾಡುವ ವೇಳೆ, ಮನೆಯಲ್ಲಿರುವ ಹಣ, ಮತ್ತು  ಚಿನ್ನಾಭರಣ ತಂದು ಪೂಜೆಗೆ ಇಡುವಂತೆ, ಇದರಿಂದ ಹಣ ಡಬಲ್ ಆಗುವುದು ಎಂದು ನಂಬಿಸಿದ್ದಾನೆ. ನಂತರ ಮನೆಯ ಪಕ್ಕದ ಅಂಗಡಿಯಿಂದ ಪೂಜೆಗೆ ಕೆಲ ಸಾಮಾಗ್ರಿ ತರುವಂತೆ ಹೇಳಿ, ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಚಿಕ್ಕಜಾಲ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com