ಏಳು ಮಂದಿ ದರೋಡೆಕೋರರು, ಮನೆಯ ಮುಂಬಾಗಿಲು ಮುರಿದು ಒಳನುಗ್ಗಿ ಬೆಲೆಬಾಳುವ ವಸ್ತುಗಳಿಗಾಗಿ ಶೋಧ ನಡೆಸಿದ್ದಾರೆ. ಗಲಾಟೆಯಿಂದ ಎಚ್ಚರಗೊಂಡು ಪ್ರತಿರೋಧ ತೋರಿದ ಪಾರ್ಥಿಬನ್ ಅವರ ಕಾಲಿಗೆ ರಾಡ್ನಿಂದ ಹೊಡೆದಿದ್ದಾರೆ ಅವರ ರಕ್ಷಣೆಗೆ ಬಂದ ಪತ್ನಿ ಪ್ರಭಾವತಿ, ತಾಯಿ ವಲ್ಲಿಯಮ್ಮನ್, ಮಗಳು ಪವಿತ್ರ ಅವರ ಮೇಲೆ ರಾಡ್ನಿಂದ ಹಲ್ಲೆ ನಡೆಸಿ ಕೈ ಕಾಲು ಕಟ್ಟಿ ಬೆದರಿಸಿದ್ದಾರೆ.