ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾತ್ರ ಸೈರನ್ ಬಳಸಬೇಕು ಎಂದು ಮೋಟಾರು ವಾಹನ ಕಾಯ್ದೆ ಹೇಳುತ್ತದೆ. ಆದರೆ, ದೇವರಾಜ್ ಶವ ಸಾಗಿಸುವಾಗ ಸೈರನ್ ಹಾಕಿಕೊಂಡು ವೇಗವಾಗಿ ವಾಹನ ಚಲಾಯಿಸಿದ್ದಾರೆ. ಹೀಗಾಗಿ, ಅಜಾಗರೂಕ ಚಾಲನೆಯಿಂದ ಸಾರ್ವಜನಿಕರ ಜೀವಕ್ಕೆ ಕುತ್ತು ತಂದ (ಐಪಿಸಿ 279) ಆರೋಪದಡಿ ಬಂಧಿಸಲಾಗಿತ್ತು. ಕೆಎ05-ಎಸಿ6633 ಸಂಖ್ಯೆಯ ವಾಹನದಲ್ಲಿ ಶವವನ್ನು ಸಾಗಿಸುಲಾಗುತ್ತಿತ್ತು.