ಬೆಂಗಳೂರು: ಗೋಡೆ ಕುಸಿತಕ್ಕೆ ಸಿಕ್ಕಿದ್ದ ಆಟೋ ಚಾಲಕನನ್ನು ರಕ್ಷಿಸಲು ಹೋಗಿ ಮೃತಪಟ್ಟ ಬಾಲಕ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗೋಡೆ ಆಟೋ ಚಾಲಕನ ಮೇಲೆ ಬಿದ್ದಾಗ ನೆರವಿಗೆ ಹೋದ ಬಾಲಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗೋಡೆ ಆಟೋ ಚಾಲಕನ ಮೇಲೆ ಬಿದ್ದಾಗ ನೆರವಿಗೆ ಹೋದ ಬಾಲಕ ಮೃತಪಟ್ಟ ಘಟನೆ ಹೊಸೂರು ರಸ್ತೆಯಲ್ಲಿ ನಡೆದಿದೆ.

ನೀಲಸಂದ್ರದಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಝಮಾನ್ ರಾಜಾ ಎಂಬ ಬಾಲಕ ತನ್ನ  ಅಣ್ಣ ಆಲಿ ಜೊತೆಗೆ  ಮಸೀದಿಯಲ್ಲಿ ನಿನ್ನೆ ಸಾಯಂಕಾಲದ ಪ್ರಾರ್ಥನೆ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ. ಆಗ ಮಳೆ ಜೋರಾಗಿ ಬರುತ್ತಿತ್ತು. ಅಬ್ದುಲ್ ಕರೀಂ ಎಂಬ ಆಟೋ ಚಾಲಕ ಆಸ್ಟಿನ್ ಟೌನ್ ನಿವಾಸಿ ಮಳೆಯಿಂದ ತಪ್ಪಿಸಿಕೊಳ್ಳಲು ಜಾನ್ಸನ್ ಮಾರುಕಟ್ಟೆ ಹತ್ತಿರ ಬಿಬಿಎಂಪಿ ಕಟ್ಟಡದ ಬಳಿ ನಿಂತಿದ್ದರು. ಜೋರು ಮಳೆಗೆ ಕಟ್ಟಡ ಕುಸಿದು ಬಿತ್ತು. 

ಅದನ್ನು ನೋಡಿದ ಝಮಾನ್ ರಾಜಾ ಸಹಾಯ ಮಾಡಲೆಂದು ಕೂಡಲೇ ತನ್ನ ಅಣ್ಣನೊಡನೆ ತೆರಳಿದನು. ಗೋಡೆಯ ನಡುವೆ ಸಿಲುಕಿ ಗಂಭೀರ ಗಾಯಗೊಂಡನು. ತಕ್ಷಣ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಇಂದು ಬೆಳಗ್ಗೆ 10.30ಕ್ಕೆ ನಿಧನ ಹೊಂದಿದನು. ಆಲಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ.

ಅಶೋಕ ನಗರ ಪೊಲೀಸರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಕೇಸು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com