ಶಾಸಕನಾಗಬೇಕೆಂಬ ಹಂಬಲದಿಂದ 50 ಕೋಟಿ ರು ಹಣ ಬದಲಾಯಿಸಿದ್ದ ರೌಡಿ ನಾಗ!...

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ದಿಸಲು ಮಾಜಿ ಕಾರ್ಪೋರೇಟರ್ ಹಾಗೂ ರೌಡಿ ನಾಗ 50 ಕೋಟಿ ರು. ಮೌಲ್ಯದ ಹಳೇಯ ...
ರೌಡಿ ನಾಗ ಅಲಿಯಾಸ್
ರೌಡಿ ನಾಗ ಅಲಿಯಾಸ್
Updated on
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ದಿಸಲು ಮಾಜಿ ಕಾರ್ಪೋರೇಟರ್ ಹಾಗೂ ರೌಡಿ ನಾಗ  50 ಕೋಟಿ ರು. ಮೌಲ್ಯದ ಹಳೇಯ ನೋಟುಗಳನ್ನು ಬದಲಾವಣೆ ಮಾಡಿಸಿಕೊಟ್ಟಿರುವುದಾಗಿ ಹೇಳಿದ್ದಾನೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ರೌಡಿ ನಾಗನನ್ನು ಬಂಧಿಸಿರುವ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ಈ ಸತ್ಯವನ್ನು ಬಹಿರಂಗ ಪಡಿಸಿದ್ದಾನೆ.
ತಾನು ಉದ್ಯಮಿಗಳಿಂದ ಹಣ ಹಣ ಪಡೆದು ಅದನ್ನು ಬದಲಾಯಿಸಿಕೊಟ್ಟಿದ್ದಾಗಿ ಹೇಳಿದ್ದಾನೆ. ಆದರೆ ಈ ಮೊದಲು ಪೊಲೀಸರು ಹಾಗೂ ರಾಜಕಾರಣಿಗಳ ಹಣ ಬದಲಾಯಿಸಿಕೊಟ್ಟಿದ್ದಾಗಿ ನಾಗ ಹೇಳಿದ್ದ. ಆದರೆ ಆತನ ಮನೆಯಲ್ಲಿ ಸಿಕ್ಕ ಹಣದ ಮೂಲದ ಬಗ್ಗೆ ಮಾತ್ರ ನಾಗರ ಯಾವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ರೌಡಿ ನಾಗ ವಿಚಾರಣೆಗೆ ಸಹಕರಿಸುತ್ತಿಲ್ಲ, ತನ್ನ ರಾಜಕೀಯ ವೃತ್ತಿ ಜೀವನವನ್ನು ಹಾಳು ಮಾಡಿದ್ದರೆಂದು ಪೊಲೀಸರ ಮೇಲೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ತನಿಖೆ ನಡೆಸುತ್ತಿರುವ ಕೆ.ಆರ್ ಪುರಂ ಎಸಿಪಿ ರವಿ ಕುಮಾರ್, ರೌಡಿ ನಾಗನ ಮಾಜಿ ವಕೀಲ ಶ್ರೀರಾಮ ರೆಡ್ಡಿ ವಿರುದ್ಧ ಕೇಸು ದಾಖಲಿಸಿದ್ದಾರೆ. ರೌಡಿ ನಾಗ ಈ ಮೊದಲು ಷರತ್ತಿನ ಮೇಲೆ ಶರಣಾಗುವುದಾಗಿ ಶ್ರೀರಾಮ ರೆಡ್ಡಿ ಹೇಳಿದ್ದರು. ಆದರೆ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಶ್ರೀರಾಮರೆಡ್ಡಿ ವಿರುದ್ಧ ದೂರು ದಾಖಲಿಸಿರುವುದಾಗಿ ಕಂಪ್ಲೇಂಟ್ ನಲ್ಲಿ ಉಲ್ಲೇಖವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com