ಸಿದ್ದರಾಮಯ್ಯ ಪ್ರವಾಸಕ್ಕಾಗಿ ನಿರ್ಬಂಧಿಸಿದ್ದ ಸಂಚಾರದಲ್ಲಿ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ಪೊಲೀಸರು

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣಕ್ಕಾಗಿ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಿದ್ದ ರಸ್ತೆಯಲ್ಲೇ ಆಂಬುಲೆನ್ಸ್‌ ಸಂಚರಿಸಲು ಪೊಲೀಸರು ಅನುಕೂಲ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣಕ್ಕಾಗಿ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಿದ್ದ ರಸ್ತೆಯಲ್ಲೇ ಆಂಬುಲೆನ್ಸ್‌ ಸಂಚರಿಸಲು ಪೊಲೀಸರು ಅನುಕೂಲ ಮಾಡಿಕೊಟ್ಟಿದ್ದಾರೆ.
ಭಾನುವಾರ ಸಂಜೆ 5 ಗಂಟೆ ವೇಳೆಗೆ ಕಾರ್ಯಕ್ರಮ ಪ್ರಯುಕ್ತ ಬೇರೆ ಜಿಲ್ಲೆಗೆ ಹೋಗಿದ್ದ ಸಿದ್ದರಾಮಯ್ಯ, ಅಲ್ಲಿಂದ ಎಚ್‌ಎಎಲ್‌ ನಿಲ್ದಾಣಕ್ಕೆ ಮಧ್ಯಾಹ್ನ  ಬಂದಿಳಿದಿದ್ದರು. ತದನಂತರ ಅವರು ಕಾರಿನಲ್ಲಿ ನಿವಾಸಕ್ಕೆ ಹೊರಟಿದ್ದರು. ಆ ಕಾರಿಗೆ ದಾರಿ ಮಾಡಿಕೊಡುವಂತೆ  ಬೆಂಗಾವಲು ಪಡೆ ಸಿಬ್ಬಂದಿ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದರು. 
ಕಾರು ಹೊರಡುತ್ತಿದ್ದಂತೆ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲೆಲ್ಲಾ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಅದೇ ವೇಳೆ ಹಾಸ್ಮಟ್‌ ಆಸ್ಪತ್ರೆಯ ಆಂಬುಲೆನ್ಸ್‌ ಹೋಗುತ್ತಿತ್ತು.
ಅದನ್ನು ಗಮನಿಸಿದ ಸಂಚಾರ ಪೊಲೀಸರು, ಬೆಂಗಾವಲು ಪಡೆ  ಸಿಬ್ಬಂದಿಗೆ ಮಾಹಿತಿ ನೀಡಿದಾರಿ ಮಾಡಿಕೊಡುವಂತೆ ಹೇಳಿದ್ದರು. 
ಬಳಿಕ ಮುಖ್ಯಮಂತ್ರಿ ಅವರ ಕಾರಿನ ಜತೆಗೆ ಹಿಂದೆ–ಮುಂದೆ ಇದ್ದ ಎಲ್ಲ ವಾಹನಗಳು, ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟವು. ನಿರ್ಬಂಧಿತ ರಸ್ತೆಯಲ್ಲೇ ಆಂಬುಲೆನ್ಸ್‌  ಸಂಚರಿಸಿ ನಿಗದಿತ ಸಮಯಕ್ಕೆ ಆಸ್ಪತ್ರೆ ತಲುಪಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com