ರಾಜ ಕಾಲುವೆಯಲ್ಲಿ ಕೊಚ್ಚಿ ಹೋದ ಶಾಂತಕುಮಾರ್‌ಗಾಗಿ ಮುಂದುವರೆದ ಶೋಧ ಕಾರ್ಯ

ಕಳೆದ ಶನಿವಾರ ಸುರಿದ ಭಾರೀ ಮಳೆಗೆ ಕಾರ್ಮಿಕ ಶಾಂತಕುಮಾರ್ ಎಂಬುವರು ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದು ಅವರ ಶೋಧ ಕಾರ್ಯ ಸೋಮವಾರವೂ...
ಕಾರ್ಯಾಚರಣೆಯಲ್ಲಿ ತೊಡಗಿರುವ ಜೆಸಿಬಿ
ಕಾರ್ಯಾಚರಣೆಯಲ್ಲಿ ತೊಡಗಿರುವ ಜೆಸಿಬಿ
Updated on
ಬೆಂಗಳೂರು: ಕಳೆದ ಶನಿವಾರ ಸುರಿದ ಭಾರೀ ಮಳೆಗೆ ಕಾರ್ಮಿಕ ಶಾಂತಕುಮಾರ್ ಎಂಬುವರು ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದು ಅವರ ಶೋಧ ಕಾರ್ಯ ಸೋಮವಾರವೂ ಮುಂದುವರೆದಿದೆ. 
ತಿಗಳರಪಾಳ್ಯದಲ್ಲಿನ ರಾಜಕಾಲುವೆಯಲ್ಲಿ ಶಾಂತಕುಮಾರ್ ಅವರು ಕೊಚ್ಚಿ ಹೋಗಿದ್ದು ವಿಪತ್ತು ಕ್ರಿಯಾ ತಂಡ, ಅಗ್ನಿಶಾಮಕ ದಳ, ಪೊಲೀಸರು ಮತ್ತು ನಗರ ಪಾಲಿಕೆ ರಕ್ಷಣಾ ತಂಡ ಹುಡುಕಾಟ ಮುಂದುವರೆಸಿದೆ. 
ಶಾಂತಕುಮಾರ್ ಅವರು ಬಿಬಿಎಂಪಿ ಗುತ್ತಿಗೆದಾರ ಬಸವರಾಜ್ ಅವರ ಸೋದರಳಿಯ. ಕಾರ್ಮಿಕರಿಗೆ ಕೂಲಿ ನೀಡಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. 
ನಾವು ಅವರು ಬಿದ್ದ ರಾಜಾ ಕಾಲುವೆ ಸಾಗುವ ದಾರಿಯಲ್ಲೆಲ್ಲ ಹುಡುಕಿದ್ದೇವೆ. ಆದರೂ ಅವರಾಗಲೀ ಅವರ ದೇಹವಾಗಲೀ ಪತ್ತೆಯಾಗಿಲ್ಲ. ಆದ್ದರಿಂದ ಇಂದು ಸಹ ಶೋಧ ಕಾರ್ಯ ಮುಂದುವರೆದಿದೆ ಎಂದು ಬಿಬಿಎಂಪಿ ಕಮಿಷನರ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com