ಮಂಗಳೂರು: ಮೂವರು ಬ್ಯಾಂಕ್ ಭದ್ರತಾ ಸಿಬ್ಬಂದಿಗಳು ಅನುಮಾನಾಸ್ಪದ ಸಾವು

ಮಂಗಳೂರು, ಉಳ್ಳಾಲದ ಕೆ.ಸಿ.ರೋಡ್‌ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಲ್ಲಿ ಮೂವರು ಭದ್ರತಾ ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಮಂಗಳೂರು: ಮೂವರು ಬ್ಯಾಕ್ ಭದ್ರತಾ ಸಿಬ್ಬಂದಿಗಳು ಅನುಮಾನಾಸ್ಪದ ಸಾವು
ಮಂಗಳೂರು: ಮೂವರು ಬ್ಯಾಕ್ ಭದ್ರತಾ ಸಿಬ್ಬಂದಿಗಳು ಅನುಮಾನಾಸ್ಪದ ಸಾವು
ಮಂಗಳೂರು: ಮಂಗಳೂರು, ಉಳ್ಳಾಲದ ಕೆ.ಸಿ.ರೋಡ್‌ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಲ್ಲಿ ಮೂವರು ಭದ್ರತಾ ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಸೋಮನಾಥ್‌, ಉಮೇಶ್‌ ಮತ್ತು ಸಂತೋಷ್‌ ಎಂದು ಗುರುತಿಸಲಾಗಿದ್ದು ನಿನ್ನೆ ರಾತ್ರಿ ಸುರಿದಿದ್ದ ಸಿಡುಲು ಸಹಿತ ಮಳೆಯ ಸಮಯದಲ್ಲಿ ವಿದ್ಯುತ್ ಕೈಕೊಟ್ಟಾಗ ಜನರೇಟರ್ ಆನ್ ಮಾಡಿ ಮಲಗಿದ್ದರು ಎನ್ನಲಾಗಿದೆ. ಆ ವೇಳೆ  ಅದರಿಂದ ಹೊರಸೂಸಿದ ಕಾರ್ಬನ್ ಮೊನೋಕ್ಸೈಡ್ ರಾಸಾಯನಿಕಯುಕ್ತ ಗಾಳಿ ಸೇವಿಸಿ ಮೂವರೂ ಮೃತರಾಗಿದ್ದಾರೆ ಎಂದು ಹೇಳಲಾಗಿದೆ. ಇವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಸೋಮವಾರ ರಾತ್ರಿ ಮಲಗಿದ್ದ ಮೂವರೂ ಇಂದು ಮಲಗಿದಲ್ಲೇ ಸಾವನ್ನಪ್ಪಿದ್ದು ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ನಿಜವಾದ  ಕಾರಣ ತಿಳಿದು ಬರಲಿದೆ. 
ಇತ್ತೀಚೆಗೆ ಬ್ಯಾಂಕ್ ದರೋಡೆ ನಡೆದ ನಂತರ ರಾತ್ರಿ ಪಾಳಿಗಾಗಿ ಭದ್ರತಾ ಸಿಬ್ಬಂದಿಗಳನ್ನು ಬ್ಯಾಂಕ್ ನೇಮಕ ಮಾಡಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com