ಮೃತರನ್ನು ಸೋಮನಾಥ್, ಉಮೇಶ್ ಮತ್ತು ಸಂತೋಷ್ ಎಂದು ಗುರುತಿಸಲಾಗಿದ್ದು ನಿನ್ನೆ ರಾತ್ರಿ ಸುರಿದಿದ್ದ ಸಿಡುಲು ಸಹಿತ ಮಳೆಯ ಸಮಯದಲ್ಲಿ ವಿದ್ಯುತ್ ಕೈಕೊಟ್ಟಾಗ ಜನರೇಟರ್ ಆನ್ ಮಾಡಿ ಮಲಗಿದ್ದರು ಎನ್ನಲಾಗಿದೆ. ಆ ವೇಳೆ ಅದರಿಂದ ಹೊರಸೂಸಿದ ಕಾರ್ಬನ್ ಮೊನೋಕ್ಸೈಡ್ ರಾಸಾಯನಿಕಯುಕ್ತ ಗಾಳಿ ಸೇವಿಸಿ ಮೂವರೂ ಮೃತರಾಗಿದ್ದಾರೆ ಎಂದು ಹೇಳಲಾಗಿದೆ. ಇವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.