ಬೆಳ್ಳಂದೂರು ಅಮಾನಿಕರೆಯಲ್ಲಿ ನಿನ್ನೆ ವಿವಿಧ 4 ಘಟಕಗಳ 136 ದಶಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ಯೋಜನೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದ್ದು, ದನಕರುಗಳಿಗೆ ನೀರು ಮತ್ತು ಕೃಷಿಗೆ ಸಹಕಾರಿಯಾಗಲಿದೆ. ಬೆಂಗಳೂರಿನ ಕೆರೆಗಳಲ್ಲಿ ಉಂಟಾಗುತ್ತಿರುವ ನೊರೆ ಕೂಡ ಕಡಿಮೆಯಾಗಿಲದೆ. ಇಂತಹ ಯೋಜನೆ ಬಗ್ಗೆ ಮಾಹಿತಿ ತಿಳಿಯದೆಯೇ ಕೆಲವರು ಮಾತನಾಡುತ್ತಿದ್ದಾರೆ. ಮತ್ತೆ ಕೆಲವರು ತಿಳಿಸಿದ್ದರೂ ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.