ಬೆಳಗಾವಿ ಅಧಿವೇಶನದಲ್ಲಿ ಮೊನ್ನೆ 20ರ ವೇಳೆಗೆ 25 ಹೊಂಡ ಗುಂಡಿಗಳಿದ್ದು ಅವುಗಳನ್ನು ಮುಚ್ಚಬೇಕಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದರು. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಅಂಕಿಅಂಶ ಪ್ರಕಾರ, ಪಾಲಿಕೆ ಸರಹದ್ದಿನೊಳಗೆ ಯಾವುದೇ ರಸ್ತೆಯಲ್ಲಿ ಗುಂಡಿಗಳಿಲ್ಲ. ಆದರೆ ಎಕ್ಸ್ ಪ್ರೆಸ್ ಪತ್ರಿಕೆ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಪಾಲಿಕೆಯ ಸರಹದ್ದಿನಲ್ಲಿ ಶಾಂತಿನಗರ, ಹೆಣ್ಣೂರು ರಸ್ತೆ, ಬಳ್ಳಾರಿ ರಸ್ತೆ, ನಾರಾಯಣಪುರ, ಮಾಗಡಿ ರಸ್ತೆ ಮತ್ತು ರಾಜಕುಮಾರ್ ರಸ್ತೆಯ ಹಲವು ಕಡೆಗಳಲ್ಲಿ ಗುಂಡಿಗಳಿವೆ ಎಂಬುದು ತಿಳಿದುಬಂದಿದೆ.