ದೇಗುಲದಲ್ಲಿಯೇ ನಾವು ಸಮಯವನ್ನು ಕಳೆಯುತ್ತೇವೆ. ಜಾತ್ರೆ ಸಂದರ್ಭದಲ್ಲಿ ಯಾರೊಬ್ಬರೂ ಮಾತನಾಡುವುದಿಲ್ಲ. ಮಕ್ಕಳು ಅಳುವುದಕ್ಕೆ ಆರಂಭಿಸಿದರೆ, ಪೋಷಕರು ಜನರಿಂದ ದೂರ ಕರೆದುಕೊಂಡು ಹೋಗುತ್ತಾರೆ. ಸಂಜೆ ವೇಳೆಗೆ ಮನೆಗೆ ಹಿಂದಿರುಗುತ್ತೇವೆ. ಜಾತ್ರೆಗೆ ತೆರಳಿದ ಬಳಿಕ ನಮ್ಮ ಮನೆಗಳನ್ನು ಗ್ರಾಮದ ದೇವತೆಯೇ ಕಾಯುತ್ತಾಳೆಂದು ನಂಬಿದ್ದೇವೆಂದು ಬಾಗಲಕೋಟೆ ಇಂಜಿನಿಯರಿಂಗ್ ವಿದ್ಯಾರ್ಥಿ, ಭಕ್ತ ಸಂದೀಪ್ ಬೂನಕೊಪ್ಪ ಅವರು ಹೇಳಿದ್ದಾರೆ.