ಮೊನ್ನೆ ಭಾನುವಾರ 3.30ರ ಸುಮಾರಿಗೆ 28 ವರ್ಷದ ಅಜಯ್ ಕುಮಾರ್ ಎಂಬ ಯುವಕ ವಿಂಡ್ಸರ್ ಮ್ಯಾನರ್ ಸೇತುವೆ ಹತ್ತುವುದನ್ನು ಜನರು ನೋಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮದ ಭದ್ರತೆ ತಪಾಸಣೆ ಮಾಡಲು ಹೋಗುತ್ತಿದ್ದ ಹೈ ಗ್ರೌಂಡ್ ಪೊಲೀಸರು ಅಜಯ್ ನನ್ನು ಕೆಳಗಿಳಿಸಿ ರಕ್ಷಿಸಿದ್ದರು. ಬ್ಲೂ ವೇಲ್ ಗೇಮ್ ನಿಂದ ವ್ಯಕ್ತಿ ಪ್ರಭಾವಿತನಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆಪ್ ಡೌನ್ ಲೋಡ್ ಮಾಡುವಂತೆ ಅಜಯ್ ಹಿಂದಿಯಲ್ಲಿ ಒಂದೇ ಸಮನೆ ಬೊಬ್ಬೆ ಹಾಕುತ್ತಿದ್ದ.