ಐಟಿ ದಾಳಿ ವಿರುದ್ಧ ನಾನಿಲ್ಲ. ಆದರೆ, ಕಾಂಗ್ರೆಸ್ ನಾಯಕರನ್ನಷ್ಟೇ ಗುರಿ ಮಾಡಬಾರದು. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಿವಾಸದ ಮೇಲೂ ದಾಳಿಯಾಗುವ ಸಂಭವವಿದೆ ಎಂಬ ವರದಿಗಳಿಗೆ ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಅವಲು, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಸರ್ಕಾರದ ಸೇವೆಯಲ್ಲಿರುವವರು. ಅವರನ್ನು ಸಿದ್ದರಾಮಯ್ಯ ಅಥವಾ ಮುಖ್ಯಮಂತ್ರಿಗಳ ಆಪ್ತರೆಂದು ವರ್ಗೀಕರಿಸಬಾರದು ಎಂದು ತಿಳಿಸಿದ್ದಾರೆ.