ದಿ ನ್ಯೂ ಸಂಡೇ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಹೆಂಡ್ರಿಕ್ ಹಾರ್ಡ್ಮ್ಯಾನ್ ಕುರಿತಂತೆ ಸುದ್ದಿಯೊಂದು ವರದಿಯಾಗಿತ್ತು. ನಮಸ್ಕಾರ ಎಂಬ ಲೇಖನದಲ್ಲಿ ಹೆಂಡ್ರಿಕ್ ಹಾರ್ಡ್ಮ್ಯಾನ್ ಅವರು ಮೂಲ ಕನ್ನಡಿಗರಂತೆ ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಾರೆ. ಇದೊಂದು ಅಪ್ರತಿಮ ಪ್ರತಿಭೆ ಎಂದು ಹೇಳಲಾಗಿತ್ತು. ಈ ವರದಿಯನ್ನು ಗಮನಿಸಿದ್ದ ಮೈಸೂರು ಉಪ ಆಯುಕ್ತರು ಡಿ ರಣ್ದೀಪ್ ಅವರು ಹೆಂಡ್ರಿಕ್ ಹಾರ್ಡ್ಮ್ಯಾನ್ ಅವರದ್ದು ಅಪರೂಪದ ಸಾಧನೆ ಎಂದು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸು ಮಾಡಿದ್ದರು.